Thursday, 13 July 2017

ಹುಟ್ಟು ಉಚಿತ ಸಾವು ಖಚಿತ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ,ಇರುವ ನಾಲ್ಕು ದಿನದಲ್ಲಿ ನಿನ ಏನು ಮಾಡಿದೋ ಮನುಜ. ಬಂಧು-ಬಳಗ ಸಮಾಧಿ ವರಗೆ,ಯಾರು ಬರುವರಿಲ್ಲ ನಿನ್ನ ಜೊತೆ . ಹೆತ್ತ ತಂದೆ-ತಾಯಿ ಜನ್ಮ ಕೊಟ್ಟರು ,ದೇವರಗೆ ಕೈ ಮುಗಿದು ವರ ಕೇಳಿದರು ಕೊಡಲಾರನು .ಆದರೆ ಹೆತ್ತ ತಂದೆ-ತಾಯಿ ಜೀವ ಕೊಟ್ಟು ಅವರು ಉಪವಾಸು ಇದ್ದು ನಿನಗೆ ಕೈ ತುತ್ತು ಹಾಕಿ ದೊಡ್ಡವರನ್ನಾಗಿ ಮಾಡಿದರು ,,ಅವರ ಇಳಿಯ ವಯಸ್ಸಿನಲ್ಲಿ ವೃದ್ರಾಶ್ರಮಕ್ಕೆ ಸೇರಿಸಿದಿ .. ಇದೇನಾ ನಮ್ಮ ಸಂಸ್ಕೃತಿ ???
ನಿನ್ನೆ ಒಂದು ಘಟನೆ ನಡಿಯಿತು. ಆ ವ್ಯತೆ ಯಾವ ತಂದೆಯು ಉಹಿಸಲಾರದ ಘಟನೆ ಯಾಗಿತ್ತು . ನಮ್ಮ ಪಕ್ಕದ ಜಿಲ್ಲೆ ಬಾಗಲಕೋಟೆಯಲ್ಲಿ ೮೫ ವರ್ಷದ ವೃದ್ಧನ ಮೇಲೆ ಆತನೆ ಜನ್ಮ ನೀಡಿದ ಮಕ್ಕಳು ಆಸ್ತಿಗಾಗಿ ತಂದೆಯ ಮೇಲೆ ಹಲ್ಲೆ ಮಾಡಿದರು , ನರಕಯಾತನೆ ಮುಗಲ ಮುಟ್ಟಿತ್ತು ,ಯಾರೊಬ್ಬರೂ ಆತನ ಸಹಾಯಕ್ಕೆ ಬರಲಿಲ್ಲ ,ರಸ್ತೆಯಲ್ಲಿ ರಕ್ತದ ಹೋಕುಳಿ ಚಿಮಿರುತ್ತು . ಸುಡುವ ಬಿಸಿಲನ ಧಗೆಯಲ್ಲಿ ಆ ವೃದ್ಧನ ಕೂಗು ಯಾರೊಬ್ಬರುಗು ಕೇಳಲಿಲ್ವಾ ? ಸುತ್ತಲೂ ನೆರೆದ ಜನಸಾಗರ ಅಚ್ಚರಿಯನ್ನ ನೋಡತಾ ಇದ್ದಾರೆ ,ಇನ್ನು ಕೆಲವರು ವಿಡಿಯೋ ಮಾಡತ ಇದಾರೆ. ಪಾಪ ಆ ವೃದ್ಧನ  ಕೊನೆಯ ಉಸಿರು ಯಮಾನವರೆಗೂ ಹೋಗಿ ಬಂತು. ಚಿಗುರುವ ವಯಸ್ಸಲ್ಲ ಬಾಡಿ ಹೋದ ಹೂ ಅದು. ತನ್ನ ಹೆಗಲ ಮೇಲೆ ಮಕ್ಕನ್ನ ಹೊತ್ತು ತಿರಗಿದ ,ಬೇಡಿದಾಗ ಜೇಬಿನಿಂದ ದುಡ್ಡು ಕೊಟ್ಟ .. ಆನೆ ಬಂತು ಆನೆ ಆಟ ಆಡಿಸಿದ ,ಇಂದು ಅದೇ ಮಕ್ಕಳು ದುಡ್ಡು ಕೊಟ್ಟ ಕೈ ಯನ್ನ ಮುರಿದರು .. ಆನೆ ಬಂತು ಆನೆಯ ಕಾಲನ್ನ ಮುರಿದರು . ಹೆಗಲೇ ಮೇಲೆ ಹೊತ್ತು  ನಡೆದಾತನನ್ನು ಬಿಸಿಲಿನಲ್ಲಿ ದರದರನೆ ಎಳೆದರು .. ಇಂತ ಮಕ್ಕಳು ಇರತರ ಜಗತ್ತನಲ್ಲಿ .. ಆಸ್ತಿಗಾಗಿ ತಂದೆಯನ್ನು ವೈರಿಯಂತೆ ನೋಡಿದ ಮಕ್ಕಳು ಬೇಕಾ???
ಖಂಡಿತವಾಗಿ ಹೇಳತೀನಿ ಈ ದೃಶ್ಯ ನೋಡಿದ ಎಂತ ಮಕ್ಕಳಪ್ಪ ,ಛೇ  ಇದು ಒಳ್ಳೆಯ ಪಾಠ ತಂದೆಯರಿಗೆ ,ಗಂಡು ಮಗುವಿಗಾಗಿ ಅದೆಷ್ಟೋ ಬೃಣ ಹತ್ಯನ ಮಾಡಿದರು . ಗಂಡು ಮಗು ಬೇಕಂತ ಹೆಂಡತಿಯನ್ನ ಪೀಡಿಸಿದರು . ಹೆಣ್ಣು ಮಗುವನ್ನ ಕೀಳಿರಿಮೆಯಿಂದ ನೋಡಿದರು . ಆ ಹೆಣ್ಣು ಮಗು ಸತ್ತಾಗ ಕಣ್ಣತುಂಬಿ ಅಳುತ್ತೆ . ತವರಿಗಾಗಿ ಅದೆಷ್ಟೋ ದೇವರನ್ನು ಬೇಡಿದಳು ..ತಂದೆಯನ್ನ ಪೂಜಿಸಿದಳು , ಗಂಡು ಮಕ್ಕಳಿಗೆ ಇಲ್ಲಾರಿ ಸೆಂಟಿ ಮೆಂಟ .
 ಈ ದೃಶ್ಯವನ್ನು ನಾವು-ನೀವು ಎಲ್ಲರು ನೋಡಿದೀವಿ , ಇಂತ ಘಟನೆ ಮತ್ತೊಮ್ಮೆ ನೋಡದಿರಿ . ಎಲ್ಲರು  ಒಂದಲ್ಲ ಒಂದು ದಿನ ಸಾಯಬೇಕು ,ಗಳಿಸಿದ ಆಸ್ತಿಯನ್ನ ಎಲ್ಲವನ್ನು ಇಲ್ಲೇ ಬಿಟ್ಟು ಸಾಯೋದು .. ಅದು ಯಾರ ಸ್ವತ್ತಲ್ಲ ಅನುಭವಿಸಬೇಕು ಹೊರುತು ಹೊಯ್ಯುವದಲ್ಲ . ತಂದೆಯಿಂದ ಮಗನಿಗೆ ಅಸ್ತಿ ಬಂದೆ ಬರುತ್ತೆ . ಆದ್ರೆ ಹೋದ ತಂದೆ ಮತ್ತೆ ಬರುವರೇ ???
     ತಂದೆ-ತಾಯಿಗೆ ಯಾರು ನೋವು ಕೊಡಬೇಡಿ ,ನಮಗಾಗಿ ಜಿವಾನೇ ತ್ಯಾಗ ಮಾಡಿದರು . ಮತ್ಯಾಕೆ ಅವರ ಜೀವವನ್ನೇ ತಗೆಯೋದ ?ಅವರು ಇರುವತನಕ ಚೆನ್ನಾಗಿ ನೋಡ್ಕೊಳ್ಳಿ ,ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಆಗಲು ಬದಲು ತಂದೆ-ತಾಯಿಗೆ ಒಬ್ಬ ಒಳ್ಳೆ ಮಗ ಆದ್ರೆ ಸಾಕು ನಿನ್ನ ಜನ್ಮ ಸಾರ್ತಕ ...



              ತಪ್ಪಿದ್ದಲ್ಲಿ ಕ್ಷಮಿಸಿ ,,ಬರೆಯೋಕೆ ನಾನೇನು ಲೇಖಕನಲ್ಲ



























                                                                                                                       ಸ್ನೇಹ ಜಿವಿ
                                                                                                                        ಹೊನ್ನು ಮೇಟಿ

Saturday, 1 July 2017


ಅರಿಯದ  ಮಾಡಿದ ತಪ್ಪುಗಳಿಗೆ ಏಷ್ಟೋ ಜೀವಿಗಳು ಮನನೊಂದು ಹೇಳಿಕೊಳ್ಳದೆ ಚಿಂತೆಯ ಚಿತೆಯಲ್ಲಿ ಬೆಂದು ಹೋಗಿವೆ ,ತಿಳಿದು ತಿಳಿಯದೆ ಆಡಿದ ಮಾತಿನಿಂದ ಹಗಲಿದ ಜೀವಿಗಳು ಜೀವನವೆ ಬೇಡವೆಂದು ದೂರವಾಗಿವೆ ,,ನಮಗೆ ಚಿಕ್ಕ ವಿಷಯ ಇರಬಹುದು ಆದರೆ ಇನ್ನೊಬ್ಬರ ಮನಸ್ಸಿಗೆ ವಾಸಿಯಾಗದ ಗಾಯಗಳು ,ಜೀವನದ ಪ್ರಮುಖ ಘಟ್ಟ ಈ ಪ್ರಾಯ ,ಸ್ನೇಹಿತರ ಜೀವನದಲ್ಲಿ ಸರ್ವ ಸಾಮಾನ್ಯ,ತುಂಟಾಟಗಳ ಮಧ್ಯ ಬಿರುಕು ಬಂದರೆ ಜೋಡಿಸೊದು ತುಂಬಾ ಕಷ್ಟ ,ಇಬ್ಬರ ಗೆಳೆಯರ ಮದ್ಯ ಬಿರುಕು ಬಂದಾಗ ಉಳಿದ ಗೆಳಯರ ಪಾಡು ಅಗೋತಿಯೇ ಸರಿ ,,ಎಲ್ಲರು ಅರಿತು ತಿಳಿಯ ಬೇಕಾದ ಸಂಗತಿ ಎಂದರೆ ಮಾತು ಬೆಳ್ಳಿ ಮೌನ ಬಂಗಾರ ,,,ಮೌನದ ಹಿಂದೆ ಸಾವಿರ ದುಃಖ ವನ್ನು ಅಡಗಿಸಬಹುದು ... ಇರುವರಿಗೂ ಅವರ ಬೆಲೆ ಯಾರಾಗು ಗೊತ್ತಾಗಲ್ಲ ಬಿಟ್ಟ ಹೋದ ಮೇಲೆ ಅವರ ಮೌಲ್ಯ ಗೊತ್ತಾಗೊದು ,,ನಮ್ಮ  ಜೀವನದಲ್ಲಿ ಎಷ್ಟೋ ವ್ಯಕ್ತಿಗಳು ಬರತಾರೆ ಆದರೆ ಅವರ ಕೊನೆವರಿಗೆ ಕಾಪಾಡಕೊಳ್ಳದ ತುಂಬಾ ಕಷ್ಟ,  ಯಾರು ವೆಸ್ಟ್ ಪೇಪರ್ ಅಲ್ಲ ,,ಇವತ್ತಿನ ವೆಸ್ಟ್ ಪೇಪರ್ ನಾಳೆ ಗಾಳಿ ಪಟವಾಗಿ ಹಾರಾಡುವಾಗ ನಾವು ತಲೆ ಎತ್ತಿ ನೋಡಬೇಕಾಗುತ್ತದೆ ,,,ಯಾರೇ ನಿಮಗೆ ಹೀಯಾಳಿಸಿದರು ಪರವಾಗಿಲ್ಲ ಅದನ್ನ ಮರೆತು ನಿಮ್ಮ ಗುರಿಯತ್ತ ಗಮನಿಸಿ ,ಮುಂದೆ ಒಂದ ದಿನ ನಿಮ್ಮ ಅತ್ತಿರ ಬಂದೆ ಬರತಾರೆ,,,


ನೊಂದು  ಜೀವನದಲ್ಲಿ ಕೊರಗುವುದಕ್ಕಿಂತ ಏನಾದರು ಸಾಧಿಸಬೇಕು ,,ಸಿಗುವ ಒಂದ ಅವಕಾಶವನ್ನ ಸರಿಯಾಗಿ ಉಪಯೋಗಿಸಿ . ನಗುವೇ ಜೀವನ ಒಲವೆ ಮಂದಾರ ,ನಾಲ್ಕು ಗೊಡೆ ಮಧ್ಯ ಕೊರಗುವದಕ್ಕಿಂತ ಏನಾದರೂ ಸಾಧಿಸಿ ,ಹೆತ್ತ ತಂದೆ-ತಾಯಿಗೆ ಒಳ್ಳೆ ಮಕ್ಕಳಾದರೆ ಸಾಕು ,,ಮೂರನೆಯವರ ಬಗ್ಗೆ ಚಿಂತೆ ಮಾಡಿದರೆ ವ್ಯರ್ತ ,,












                                                                                                                                                                                                                                                                                                              
ಹೊನ್ನು ಮೇಟಿ